• ಅಡಿಕೆಗೆ ಹೋದ ಮಾನ ಈರುಳ್ಳಿ ಕೊಟ್ಟ್ರು ಬಾರದು
• ತರಕಾರಿ / ದಿನಸಿ ಬೆಲೆಗಳೆ ದುಖಕ್ಕೆ ಮೂಲ ಕಾರಣ
• ಊಟಕ್ಕೆ ಮೊದಲು ಎರಡು ಲೋಟ ನೀರು
• ಬೆಳ್ಳುಳ್ಳಿ ಚಿಕ್ಕದಾದ್ರು ಬೆಲೆ ದೊಡ್ಡದು
• ಬಲ್ಲವನೆ ಬಲ್ಲ ಟೊಮ್ಯಾಟೊ ರುಚಿಯ
• ಬಡವನಿಗೇನು ಗೊತ್ತು ಕೊತ್ತಂಬರಿ ವಾಸನೆ
• ಈರುಳ್ಳಿ ತಿಂದೋನು ಸಾಲ ಮಾಡಲೇಬೇಕು
• ಹೋಟೆಲ್ನಲ್ಲಿ ತಿನ್ನೋನಿಗೆ ಕೋಟಿ ಕೋಟಿ ಸಾಲದು
• ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿ (ಕೊಡೆ ಬಿಟ್ಟು) ಕಾರು ತಗೊಂಡನಂತೆ
• (ಬೆಲೆಗಳನ್ನ) ಪ್ರಣವ್ ಭೂಮಿಗೆಳೆದ್ರೆ, ಪವಾರ ಆಕಾಶಕ್ಕೆ ಎಳಿತಾರೆ
• ಕೊಹಿನೂರಿಗೊಂದು ಕಾಲ ಆದ್ರೆ, ಈರುಳ್ಳಿಗೊಂದು ಕಾಲವಂತೆ
• ಭರವಸೆ ಕೊಡೊ ಸರಕಾರ, ಭರವಸೇನ ಊಲಿಸ್ಕೊಳ್ಳಲ್ವಂತೆ
• ಜೇಬು ಖಾಲಿ ಇಲ್ಲವೆ ಹೊಟ್ಟೆ ಖಾಲಿ
-ಕಲ್ಯಾಣ ಕುಲ್ಕರ್ಣಿ
No comments:
Post a Comment