Pages

Friday, December 20, 2013

ರಾಜಕೀಯದ ಅಸ್ಪೃಶ್ಯತೆ

ಸ್ವಾತಂತ್ರ್ಯಾ ನಂತರದ ಭಾರತದ ರಾಜಕೀಯ ವ್ಯವಸ್ಥೆಯ ಪುಟಗಳನ್ನು ಒಮ್ಮೆ ಹಿಂದಿರುವಿ ನೋಡಿದಾಗ ಅಲ್ಲಿ ಅದೆಷ್ಟೋ ಪುಟಗಳು ನಮ್ಮ ಕಣ್ಣಿಗೆ ದಪ್ಪ-ದಪ್ಪ ಅಕ್ಷರಗಳಲ್ಲಿ ಮುದ್ರಿಸಿರುವುದು ಕಂಡರೂ ನಾವು ಅವುಗಳನ್ನು ಓದದೆ, ವಿಶ್ಲೇಷಿಸಿದೆ ಮುಂದುವರೆದಿರುವುದರ ಅರಿವು ನಮಗಾಗುತ್ತದೆ. ಈ ಅಲಕ್ಷವೆ ನಮ್ಮ ಇಂದಿನ ಈ ದಯನೀಯ ಸ್ಥಿತಿಗೆ ಕಾರಣವೇ? ಅಂತ ನಮಗನ್ನಿಸುತ್ತದೆ. ಹಾಗಾದರೆ ನಾವು ಎಡವಿದ್ದಾದರು ಎಲ್ಲಿ? ಮತ್ತು ನಮ್ಮ ಮುಂದಿನ ನಡಿಗೆ ಹೇಗಿರಬೇಕು? ಅನ್ನುವ ಅತಿ ಮುಖ್ಯ ಪ್ರಶ್ನೆಗಳಿಗೆ ನಾವು ಇಂದು ಉತ್ತರ ಹುಡುಕುವ ಒಂದು ಪ್ರಾಮಾಣಿಕ ಪ್ರಯತ್ನ ಮಾಡೋಣ, ಅಲ್ಲದೆ, ಇಂದಿನ ಹೊಸ ರಾಜಕೀಯದ ಕೆಲವು ಆಯಾಮಗಳನ್ನೂ ತಿಳಿದುಕೊಳ್ಳೋಣ. ಮುಂದೆ ಅಂತಹ ತಪ್ಪುಗಳು ಮರುಕಳಿಸದಂತೆ ಸಾವಧಾನವಾಗಿ ಯೋಚಿಸಿ ಮುಂದಿನ ಹೆಜ್ಜೆಗಳನ್ನ ಇಡೋಣ.



1. ರಾಜಕೀಯದ ಅಸ್ಪೃಶ್ಯತೆ 

ಸ್ವಾತಂತ್ರ್ಯ ನಂತರ ನಮ್ಮ ಪೂರ್ವಜರು (ಅಂದರೆ ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರು) ದೇಶದ ರಾಜಕೀಯ ವ್ಯವಸ್ಥೆ ಹಾಗು ತಮ್ಮ ಮಧ್ಯ ಸದಾ ಒಂದು ಮಾರುದ್ದದಷ್ಟು (ಮೀಟರ್ ಗೇಜ್) ಅಂತರ ಕಾಪಾಡಿಕೊಂಡು ಬಂದಿದ್ದಾರೆ. ಮಡಿವಂತರಿಗೆ ಅಂತ ಇದ್ದ ರಾಜಕೀಯ ದಿನೇ-ದಿನೇ ಹದಗೆಡುತ್ತಾ ಮೈಲಿಗೆವಂತರಿಗೆ ಮಾತ್ರ ಎನ್ನುವ ಸ್ಥಿತಿಗೆ ತಲುಪಿದೆ. ಆದರೂ ಈ ಹಳಿಗಳು ಸೇರಿಕೊಳ್ಳದೆ ತಮ್ಮ ಅಂತರವನ್ನು ಕಾಪಾಡಿಕೊಂಡು ಹೊಗುತ್ತಿವೆ. ರಾಜಕೀಯ ಕೆಲವರು ನಡೆಸುವ ಕಾರುಬಾರು ಅಂತ ಜನರ ಭಾವನೆ. ಏನೂ ಅರಿಯದ ಈ ಮುಗ್ಧಜನರನ್ನು ಅದೇ ಮಾನಸಿಕ ಸ್ಥಿತಿಯಲ್ಲಿ ನಡೆಸಿಕೊಂಡು ಬರುತ್ತಿವೆ ರಾಜಕೀಯ ಪಕ್ಷಗಳು ಕೂಡ. ಆಡಳಿತ, ಸರಕಾರ ಮತ್ತು ಪ್ರಜಾಪ್ರಭುತ್ವ ಅಂದರೆ ಏನು ಅಂತ ತಿಳಿಯುವ ಉಸಾಬರಿಗೆ ನಮ್ಮವರು ಹೋಗಿಲ್ಲ. ಕೇಳಿದರೆ ಕೆಲವರು ಸಂವಿಧಾನವನ್ನೇ ತಮ್ಮ ತಮ್ಮ ರೀತಿಯಲ್ಲಿ ವ್ಯಾಖನಿಸುತ್ತಾರೆ, ಆದರೆ, ಬೆರೆಯುವ, ಒಗ್ಗೂಡಿ ನಡೆಸುವ ರಾಜಕೀಯ ಮಾತ್ರ ನಮ್ಮವರಿಗೆ ಅರ್ಥವಾಗದಿರೋದು ವಿಪರ್ಯಾಸದ ಸಂಗತಿ. ಸರಕಾರ, ಒಳ್ಳೆಯ ಆಡಳಿತ ವ್ಯವಸ್ಥೆಯಿಂದ ಏನಾಗಬಹುದು, ದೇಶದ ಸ್ಥಿತಿ ಹೇಗೆ ಬದಲಾಗಬಹುದು, ದೇಶದ ಪ್ರಗತಿಯ ಪ್ರಬಲ ಇಚ್ಚಾಶಕ್ತಿಯ ಸರಕಾರ ಹೇಗೆ ದೇಶದ ಅವಸ್ಥೆ, ವ್ಯವಸ್ಥೆ ಬದಲಾಯಿಸಬಹುದು ಹಾಗೂ ಹೇಗೆ ಜನರ ಜೀವನ ಸ್ತರವನ್ನ ಹೆಚ್ಚಿಸಬಹುದು ಅನ್ನುವ ವಿಚಾರವೇ ನಮಗೆಲ್ಲ ತಿಳಿಯದಂತಾಗಿದೆ. ದೇಶಕ್ಕೆ, ಸಮಾಜಕ್ಕೆ ನಮಗಿರುವ ಜವಾಬ್ದಾರಿಯನ್ನು ಅರಿಯದೆ ದೇವರನ್ನೋ, ಹನೆಬರಹವನ್ನೋ ಹಲುಬಿ ತಮ್ಮ ತಮ್ಮ ಕೌಟುಂಬಕ್ಕೆ ಚೌಕಟ್ಟು ಹಾಕಿಕೊಂಡು ಜೀವನ ಸವಿಸೋದೆ ದೊಡ್ಡದು ಅನ್ನಿಸಿ ಬಿಟ್ಟಿದೆ. ಅಂಗೈ ಬೆಣ್ಣೆಗೆ ಕನ್ನಡಿ ಸಿಗಲಿಲ್ಲ, ಬೆಣ್ಣೆನ ಎಲ್ಲಿ ಹುಡುಕೋದು ಅಂತ ನುಣುಚಿಕೊಳ್ಳೋದೇ ಆಯಿತು.

ಇನ್ನು ಕೆಲವರು (ಮುಖ್ಯವಾಗಿ ನಾಯಕರು) ಸ್ವಾತಂತ್ರ್ಯ ಅಂದರೆ ಸ್ವೇಚ್ಛಾಚಾರ ಅಂದುಕೊಂಡಿದ್ದಾರೆ, ಇದು ಬದಲಾಗ ಬೇಕು. ಈ ರಾಷ್ಟ್ರದ ಹೊಸ ಚಿಗುರಿಗೆ ಪ್ರಜೆ ಮತ್ತು ಪ್ರಭುತ್ವ ಈ ಎರಡು ನೀರು, ಗೊಬ್ಬರ ಮತ್ತು ಸೂರ್ಯ ರಷ್ಮಿಯಾಗಬೇಕು. ಆಗ ಶತಮಾನಗಳ ವರೆಗೆ ಈ ವಸಂತ ಶಾಶ್ವತ್ತವಾಗುತ್ತದೆ. ಇದೇನು ಮಹಾ ಅಂತ ಅಡ್ಡಾದಿಡ್ಡಿ ನಡೆಯಬೇಡಿ, ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...!

-- ಅಭಿನವ ಭಾರತ

No comments:

Post a Comment